ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ವಿಠ್ಠಲ ಭಟ್ ಜ್ಯೋತಿಷ್ಯ | Oneindia Kannada
ಪರೀಕ್ಷೆಗಳು ಹತ್ತಿರ ಬಂದಿವೆ. ಮನೆಯಲ್ಲಿ ಶಾಲೆ- ಕಾಲೇಜುಗಳಿಗೆ ಹೋಗುವ ಹುಡುಗ- ಹುಡುಗಿಯರಿದ್ದರೆ ಪೋಷಕರು ಹೆಚ್ಚು ಗೊಂದಲದಲ್ಲಿ ಇರುತ್ತಾರೆ. ನನ್ನೆದುರೇ ಗಂಟೆಗಟ್ಟಲೆ ಓದುತ್ತಾನೆ/ಳೆ. ಆದರೆ ಪರೀಕ್ಷೆಯಲ್ಲಿ ಸರಿಯಾಗಿ ಬರೆಯುವುದಕ್ಕೆ ಆಗಲ್ಲ. ಓದಿದ್ದೆಲ್ಲ ಮರೆತು ಹೋಗುತ್ತದೆ ಎಂಬ ಉತ್ತರ ಕೊಟ್ಟರೆ ನಾವಾದರೂ ಏನು ಮಾಡುವುದಕ್ಕೆ ಸಾಧ್ಯ ಎಂಬುದು ಹಲವರ ಪ್ರಶ್ನೆ. ಇದಕ್ಕೆ ಮನೋವೈಜ್ಞಾನಿಕ ಕಾರಣವೂ ಒಳಗೊಂಡಂತೆ ಜ್ಯೋತಿಷ್ಯ, ವಾಸ್ತು ಕಾರಣಗಳೂ ಇರಬಹುದು. ಗೊತ್ತಿಲ್ಲದೆ ಏನೋ ಸಮಸ್ಯೆ ಆಗುತ್ತಿದೆ. ಮಗು ಮೇಲೆ ಒತ್ತಡ ಹಾಕಿ, ಅದು ಕಳಾಹೀನ ಆಗುತ್ತಿರಬಹುದು. ಆದ್ದರಿಂದ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಇಂದಿನ ಲೇಖನ ನಿಮ್ಮ ಮುಂದೆ ಇಡಲಾಗಿದೆ.
Category
🗞
News