ಧರ್ಮದೈವ ಕೊಡಮಣಿತ್ತಾಯನ ಉಗ್ರಕೋಪಕ್ಕೆ ಗುರಿಯಾದರೇ ಶೀರೂರು ಶ್ರೀ?| Oneindia Kannada

  • 6 years ago
ಗಾಳಿಗೊಂದು ಸುದ್ದಿಯೆನ್ನುವಂತೆ ಆಷಾಢ ಶುಕ್ಲ ಸಪ್ತಮಿಯ ದಿನವಾದ ಜುಲೈ 19ರಂದು ವೃಂದಾವನಸ್ಥರಾದ ಉಡುಪಿ ಅಷ್ಟಮಠಗಳ ಶ್ರೀಗಳಲ್ಲೊಬ್ಬರಾದ ಶೀರೂರು ಲಕ್ಷ್ಮೀವರ ತೀರ್ಥರ ನಿಧನದ ಸುತ್ತ ಹೊಸ ಗುಸುಗುಸು ಸುದ್ದಿಯೊಂದು ಹರಿದಾಡುತ್ತಿದೆ. ಶೀರೂರು ಶ್ರೀಗಳಿಗೆ ಫುಡ್ ಪಾಯ್ಸನ್ ಆಗಿತ್ತಾ ಅಥವಾ ಫುಡ್ಡಿಗೆ ಪಾಯ್ಸನ್ ಹಾಕಲಾಗಿತ್ತಾ ಎನ್ನುವ ಬಿಸಿಬಿಸಿ ಚರ್ಚೆಯ ನಡುವೆ, ವಾಟ್ಸಾಪ್ ನಲ್ಲೊಂದು ಹೊಸಸುದ್ದಿ ಹರಿದಾಡುತ್ತಿದೆ. ತುಳುನಾಡಿನಲ್ಲಿ ಬಹುವಾಗಿ ನಂಬುವ ದೈವದ ಶಾಪ ಶ್ರೀಗಳಿಗೆ ತಟ್ಟಿದೆ ಎನ್ನುವುದೇ ಈ ಹೊಸ ಸುದ್ದಿ.

Category

🗞
News

Recommended