ಕುಡಿಯೋಕೆ ನೀರು ಕೊಡದ ಕಾಂಗ್ರೆಸ್ಸಿಗೆ ಧಿಕ್ಕಾರ: ಎಚ್ಡಿಕೆ | Oneindia Kannada

  • 6 years ago
ಬಾಗಲಕೋಟೆ, ಏಪ್ರಿಲ್ 07: ರಾಜ್ಯದ ಜನರಿಗೆ ಸರಿಯಾಗಿ ಕುಡಿಯೋಕೆ ನೀರು ಕೊಡಲಿಕ್ಕಾಗದ ರಾಜ್ಯ ಸರ್ಕಾರ ಪತ್ರಿಕೆಗಳಲ್ಲಿ ಮಾತ್ರ ದಿನಕ್ಕೆ ಏಳು ಪುಟ ಜಾಹೀರಾತು ನೀಡುವ ಮೂಲಕ ಜನರ ತೆರಿಗೆ ದುಡ್ಡನ್ನು ನೀರಿನಂತೆ ಹಾಳು ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಮುಧೋಳದಲ್ಲಿಂದು ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ನಡೆಸೋನಿಗೆ ರೈತರ ನೋವು ಅರ್ಥ ಮಾಡಿಕೊಳ್ಳವಂತಹ ಗುಣ ಇರಬೇಕು. ಈ ಬಾರಿ ನನಗೆ ಅಧಿಕಾರ ಕೊಡಿ ಎಂದು ಜನತೆಯಲ್ಲಿ ಅವರು ಮನವಿ ಮಾಡಿದರು.

Category

🗞
News

Recommended