ಕರ್ನಾಟಕ ಜನತೆಗೆ ಸಿದ್ದರಾಮಯ್ಯ ಬರೆದ ಭಾವುಕ ಪತ್ರ | Oneindia Kannada

Oneindia Kannada

by Oneindia Kannada

1 view
Siddaramaiah emotional appeal to people: Chief minister Siddaramaiah has made an emotional appeal to the people and remind that he had waived debt of the farmers.

ರಾಜ್ಯದ ರೈತರ ಸಾಲ ತೀರಿಸಿದ ನಿಮ್ಮ ಮಗನಾದ ನನ್ನನ್ನು ನೀವೆಂದಿಗೂ ಕೈಬಿಡಲಾರಿರಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಜಾಹಿರಾತಿನ ಮೂಲಕ ವಿಧಾನಸಭೆ ಚುನಾವಣೆಗೆಅಧಿಕೃತ ಚಾಲನೆ ನೀಡಿದ್ದಾರೆ.ನಾಲ್ಕೂವರೆ ವರ್ಷಗಳ ಹಿಂದೆ ನಮ್ಮನ್ನು ಹರಸಿ ನಮಗೆ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ನಮಗೆ ನೀಡಿದ್ದೀರಿ, ನಾನು ಮುಖ್ಯಮಂತ್ರಿಯಾಗಿ ಮನಸ್ಸಿನಲ್ಲಿಯೇ ಇನ್ನೊಂದು ಪ್ರಮಾಣ ಮಾಡಿದ್ದೆ, ನುಡಿದಂತೆ ನಡೆಯುತ್ತೇನೆ ಎಂಬ ಪ್ರಮಾಣ ಮಾಡಿದ್ದೆ . ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಇಡೀ ಕರ್ನಾಟಕ ನನ್ನ ದೊಡ್ಡ ಕುಟುಂಬ ಎಂದು ನಾನು ನಂಬಿದ್ದೇನೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಎಲ್ಲರ ಮನೆಯ ಮಗನಾಗಿ ಎಲ್ಲ ಕಷ್ಟ -ಕಾರ್ಪಣ್ಯ , ನೋವು-ಸಂಕಟಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ.ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ, ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು.