ಮಲೆನಾಡಲ್ಲಿ ಬಿಡುವು ಕೊಡದ ಮಳೆರಾಯ: ಕಂಗಲಾದ ರೈತರು | Oneindia Kannada

  • 6 years ago
ಚಿಕ್ಕಮಗಳೂರು, ಜುಲೈ.13: ಮಲೆನಾಡಿನಲ್ಲಿ ಗುರುವಾರ ಸಂಜೆ ನಾಲ್ಕು ಗಂಟೆಗೆ ಆರಂಭವಾದ ವರುಣನ ಅಬ್ಬರ ಇನ್ನೂ ನಿಂತಿಲ್ಲ. ಬೆಳಗ್ಗೆಯಿಂದ ಇಡೀ ದಿನ ಬಿಡುವು ನೀಡಿದ್ದ ಮಳೆರಾಯ ಮಲೆನಾಡಿನ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಕಳಸ, ಕುದುರೆಮುಖ ಭಾಗದಲ್ಲಿ ಇಡೀ ರಾತ್ರಿ ಸುರಿದಿದ್ದಾನೆ. ಮಳೆಯ ಪ್ರಮಾಣ ಹೆಚ್ಚಿದ್ದರಿಂದ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎನ್.ಆರ್.ಪುರ ತಾಲೂಕಿನ ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ತಾಲೂಕಿನಲ್ಲಿ ಭದ್ರಾ ನದಿ ಹರಿಯೋ ಬಾಳೆಹೊನ್ನೂರು ಭಾಗದಲ್ಲಿನ ನದಿಪಾತ್ರದ ಶಾಲೆ-ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿದೆ.

Recommended