ಶ್ರೀದೇವಿಯವರ ಅಕಾಲ ಸಾವು : ಪ್ರಮುಖವಾಗಿ 5 ಅನುಮಾನಗಳ ಮೇಲೆ ತನಿಖೆ | Oneindia Kannada

  • 6 years ago
ಕಡೆಗೂ ಶ್ರೀದೇವಿ ಪಾರ್ಥೀವ ಶರೀರ ಕುಟುಂಬದ ಕೈಸೇರಿದೆ. ಶ್ರೀದೇವಿ ಪಾರ್ಥೀವ ಶರೀರವನ್ನ ಭಾರತಕ್ಕೆ ರವಾನೆ ಮಾಡಲು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಿದೆ. ವೈದ್ಯಕೀಯ ವರದಿಗಳು, ಮರಣ ಪ್ರಮಾಣ ಪತ್ರ ಹಾಗೂ ಭಾರತಕ್ಕೆ ಮೃತದೇಹ ಸಾಗಿಸಲು ಕ್ಲಿಯರೆನ್ಸ್ ಸರ್ಟಿಫಿಕೇಟ್ ಸೇರಿದಂತೆ ಎಲ್ಲ ದಾಖಲೆಗಳನ್ನ ದುಬೈ ಪೊಲೀಸರು ಶ್ರೀದೇವಿ ಕುಟುಂಬಕ್ಕೆ ನೀಡಿದ್ದಾರೆ. ಸದ್ಯ ಶ್ರೀದೇವಿ ಮೃತದೇಹವನ್ನ ಎಂಬ್ಲೇಮಿಂಗ್ (ಪಾರ್ಥೀವ ಶರೀರವನ್ನ ಸಂರಕ್ಷಿಸುವ ಪ್ರಕ್ರಿಯೆ)ಗೆ ಒಳಪಡಿಸಲಾಗಿದೆ. ಅದು ಮುಗಿದ ಮೇಲೆ ಶ್ರೀದೇವಿ ಮೃತದೇಹವನ್ನ ಭಾರತಕ್ಕೆ ತರಲಾಗುತ್ತದೆ. ಆದರೆ ದುಬೈ ಪೊಲೀಸರು ಪ್ರಮುಖವಾಗಿ 5 ಅನುಮಾನಗಳ ಮೇಲೆ ತನಿಖೆ ನಡೆಸುತ್ತಿದ್ದಾರೆ
Finally, Clearance letter issued to release the mortal remains of Bollywood Actress Sridevi. Body to now proceed for embalming process. But Police are investigating on these 5 important suspicions.


Category

🗞
News

Recommended