ಹನುಮಂತನ ಕೃಪೆಯಿಂದ ಯದುವೀರ್ ತ್ರಿಷಿಕಾಗೆ ಗಂಡು ಮಗು ಜನನ | Oneindia Kannada

  • 7 years ago
Yaduveer Urs Trishika Devi Wadiyar couple blessed with baby boy. It is said that a baby boy was born from grace of Hanumagiri Panchamukhi Anjaneya of Eshwaramangala, Puttur.


ಮೈಸೂರು ಯದುವಂಶಕ್ಕೆ ಯುವರಾಜನ ಆಗಮನವಾಗಿದೆ. ಯದುವೀರ್ ತ್ರಿಷಿಕಾ ದಂಪತಿಗೆ ಗಂಡು ಸಂತಾನ ಪ್ರಾಪ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಯದುವಂಶ, ಅಲಮೇಲಮ್ಮನ ಶಾಪದಿಂದ ಮುಕ್ತಗೊಂಡಿದೆ ಎಂಬ ಚರ್ಚೆ ಆರಂಭಗೊಂಡಿದೆ.ಯದುವೀರ್ ತ್ರಿಷಿಕಾ ದಂಪತಿಗೆ ಗಂಡು ಸಂತಾನ ಪ್ರಾಪ್ತಿಗೆ ಹನುಮನ ಕೃಪೆ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಪುತ್ತೂರಿನ ಈಶ್ವರಮಂಗಲದಲ್ಲಿರುವ ಹನುಮಗಿರಿ ಶ್ರೀ ಕ್ಷೇತ್ರದ ಪಂಚಮುಖಿ ಆಂಜನೇಯನ ಕೃಪೆಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪುತ್ರ ಸಂತಾನ ಪ್ರಾಪ್ತವಾಗಿದೆ ಎಂದು ಹೇಳಲಾಗಿದೆ.ಅಂಜನೇಯನ ಪರಮ ಭಕ್ತರಾಗಿರುವ ಯದುವೀರ್ ಕೃಷ್ಣದತ್ತ ಒಡೆಯರ್ ಕಳೆದ ತಿಂಗಳು ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ವಿಶೇಷ ಪೂಜೆ ಸಂದರ್ಭದಲ್ಲಿ ಗಂಡು ಮಗುವಿನ ಬೇಡಿಕೆ ಇಟ್ಟಿದ್ದರು . ಪೂಜೆಯ ಫಲವಾಗಿ ಯದುವೀರ್ ಅವರ ಇಷ್ಟಾರ್ಥ ಈಡೇರಿದಂತಾಗಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹನುಮಗಿರಿ ಮಂಚಮುಖಿ ಆಂಜನೇಯ ಶ್ರೀ ಕ್ಷೇತ್ರಕ್ಕೆ ಕಳೆದ ನವೆಂಬರ್ 2 ರಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Category

🗞
News

Recommended