News Cafe | ರಸ್ತೆ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಕ್ಕೆ ಮೋದಿಗೆ ರಮ್ಯಾ ಧನ್ಯವಾದ | June 22, 2022

  • 2 years ago
ಪ್ರಧಾನಿ ಮೋದಿ ಮೈಸೂರು ಭೇಟಿಗೆ ಮಾಜಿ ಸಂಸದೆ, ನಟಿ ರಮ್ಯಾ ಸ್ವಾಗತಿಸಿದ್ದಾರೆ. ಅಲ್ಲದೆ, ರಸ್ತೆ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಮೈಲಾರಿ ಬೆಣ್ಣೆ ದೋಸೆಯ ರುಚಿ ನೋಡಬೇಕಿತ್ತು.. ನೀವು ಇದೆಂದು ಇಂಥ ದೋಸೆ ತಿಂದಿರಲಿಕ್ಕಿಲ್ಲ.. ಹಾಗೇ, ನೀವು ಮೈಸೂರಿನ ಆರ್ಕೆಸ್ಟ್ರಾ ಸಂಸ್ಕøತಿಯನ್ನು ನೋಡಬೇಕಿತ್ತು.. ಅಥವಾ ಆರ್ಕೆಸ್ಟ್ರಾ ಮೈಸೂರು ಸಿನಿಮಾ ಟ್ರೈಲರ್ ನೋಡಬೇಕಿತ್ತು. ಇದನ್ನು ನಮ್ಮ ಮೈಸೂರಿನ ಯುವಕರು ಮಾಡಿರುವ ಸಿನಿಮಾ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಇನ್ನು, ಪ್ರಧಾನಿ ಮೋದಿ ರಾಜ್ಯ ಭೇಟಿ ಖಂಡಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್‍ನ ಯುವ ಅಧ್ಯಕ್ಷ ನಲಪಾಡ್‍ಗೆ ಭಾರತಿ ನಗರ ಪೊಲೀಸರು ನೋಟಿಸ್ ನೀಡಿದ್ದಾರೆ. ನಿಯಮ ಮೀರಿ ದಿಢೀರ್ ಪ್ರತಿಭಟನೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಹಿನ್ನೆಲೆ ಎಫ್‍ಐಆರ್ ದಾಖಲಿಸಲಾಗಿದೆ. 3 ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಲಾಗಿದೆ.

#publictv #newscafe