Text Book Revision Row | ಪರಿಷ್ಕೃತ ಪಠ್ಯಪುಸ್ತಕ ವಿವಾದವನ್ನ ತಣ್ಣಗಾಗಿಸಲು ರಾಜ್ಯ ಸರ್ಕಾರ ಮುಂದು..!

  • 2 years ago
Text Book Revision Row | ಪರಿಷ್ಕೃತ ಪಠ್ಯಪುಸ್ತಕ ವಿವಾದವನ್ನ ತಣ್ಣಗಾಗಿಸಲು ರಾಜ್ಯ ಸರ್ಕಾರ ಮುಂದು..!

#publictv #textbookrow #cmbasavarajbommai


ಪರಿಷ್ಕೃತ ಪಠ್ಯಪುಸ್ತಕ ವಿವಾದವನ್ನ ತಣ್ಣಗಾಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿವಾದಿತ ಪಠ್ಯಗಳನ್ನ ಮಾರ್ಪಾಡು ಮಾಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸ್ವಾಮೀಜಿಗಳು, ಸಂಘ ಸಂಸ್ಥೆಗಳ ವಿರೋಧ ಹಿನ್ನಲೆ ಸಿಎಂ ಬೊಮ್ಮಾಯಿ ಅವ್ರು ಏನೇ ಪರಿಷ್ಕರಣೆ ಇದ್ದರು ಮಾರ್ಪಾಡು ಮಾಡೋದಾಗಿ ತಿಳಿಸಿದ್ರು. ಸಿಎಂ ಸೂಚನೆ ಮೇರೆಗೆ ವಿವಾದಿತ ಪಠ್ಯಗಳ ಮಾರ್ಪಾಡಿಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಒಟ್ಟು 7 ಪಠ್ಯಗಳ ಮಾರ್ಪಾಡಿಗೆ ಸರ್ಕಾರ ಆದೇಶ ಹೊರಡಿಸಿದೆ. ಅಂಬೇಡ್ಕರ್, ಕುವೆಂಪು, ಸುರಪುರದ ರಾಜರು, ಸಿದ್ದಗಂಗಾ ಶ್ರೀಗಳು ಸೇರಿದಂತೆ ವಿವಾದಕ್ಕೆ ಕಾರಣವಾಗಿದ್ದ ಪಠ್ಯಗಳ ಮಾರ್ಪಾಡಿಗೆ ಆದೇಶ ಹೊರಡಿಸಲಾಗಿದೆ. ಮಾರ್ಪಾಡು ಪಠ್ಯವನ್ನು ಪ್ರತ್ಯೇಕ ಪುಸ್ತಕ ಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇನ್ನು ಈ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸಭೆ ಕರೆದು ಪಠ್ಯದಲ್ಲಿ ಕೆಲ ಮಾರ್ಪಡುಗಳನ್ನ ಮಾಡಲಾಗಿದೆ. ಕೆಲವು ಕಡೆ ಹಳೆಯದನ್ನೇ ಉಳಿಸಿಕೊಳ್ಳಲಾಗಿದೆ ಅಂತಾ ಹೇಳಿದ್ರು.


Watch Live Streaming On http://www.publictv.in/live

Recommended